Tuesday 12 June 2018


ನಂಬಿದ ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಮತ್ತೆ ಹಾಕ್ತೀಯಾ?: ಅಭಿಮಾನಿಗೆ ಸಿದ್ದರಾಮಯ್ಯ ಪ್ರಶ್ನೆ!


ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಫಲಿತಾಂಶ ಬಂದು ಮೈತ್ರಿ ಸರ್ಕಾರ ಬಂದ ನಂತರ ಅಧಿಕಾರದಿಂದ ದೂರ ಇರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಗೆ ನಿರೀಕ್ಷಿತ ಮಟ್ಟದಲ್ಲಿ ಪಲಿತಾಂಶ ಬಾರದ ಕಾರಣ ಕಾಂಗ್ರೆಸ್ ನಲ್ಲಿ ಇದೀಗ ತನ್ನ ಹಿಂದಿನ ಪ್ರಭಾವ ಉಳಿಸಿಕೊಂಡಿಲ್ಲ, ಬೇರೆ ನಾಯಕರು ಓವರ್ ಟೇಕ್ ಮಾಡಲು ತುದಿಗಾಲಿನಲ್ಲಿ ನಿಂತಿರುವುದು ಗೊತ್ತೇ ಇದೆ. ಅದಕ್ಕೆ ತಕ್ಕಂತೆ ಸಿದ್ದರಾಮಯ್ಯನವರು ‘ನಂಬಿದ ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಯಾಕೆ ಈಗ ಮತ್ತೆ ಟೋಪಿ ಹಾಕ್ತಿಯಪ್ಪ’ ಎಂದು ಸನ್ಮಾನ ಮಾಡಲು ಬಂದ ಅಭಿಮಾನಿಗೆ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕಾಣಲು ಮೈಸೂರಿನ ನಿವಾಸಕ್ಕೆ ಆಗಮಿಸಿದ ಅಭಿಮಾನಿ ಸರ್, ನಿಮಗೆ ಸನ್ಮಾನ ಮಾಡಬೇಕು ಎಂದಿದ್ದಾನೆ ಆಗ ಸಿದ್ದರಾಮಯ್ಯ ಕೈ ಸನ್ನೆ ಮೂಲಕ ಬಾ ಎಂದು ಕರೆದಿದ್ದಾರೆ. ಶಾಲು ಹಾರ ಹಾಕಿ ಮೈಸೂರು ಪೇಟ ತೋಡಿಸಲು ಹೋಗಾದ ಹೇ ಇದೆಲ್ಲಾ ಯಾಕಪ್ಪ ಎಂದ ಸಿದ್ದರಾಮಯ್ಯ, ಜನರೇ ಟೋಪಿ ಹಾಕಿದ್ರು. ಇದೆಲ್ಲ ಯಾಕಪ್ಪ ಅಂತಾ ನಗುತ್ತಲೇ ತಮ್ಮ ಸೋಲಿನ ಕುರಿತು ತಾವೇ ವ್ಯಂಗ್ಯ ಮಾಡಿಕೊಂಡರು.

No comments:

Post a Comment